Site icon Welcome to CYBER MITHRA

ಚುನಾವಣಾ ಆಯೋಗದ ‘SIR 2026’ ಹೆಸರಲ್ಲಿ ನಡೀತಿದೆ ಸೈಬರ್ ವಂಚನೆಗಳು

SIR

ಈ ತಿಂಗಳು ಕರ್ನಾಟಕದ ಎಲ್ಲೆಡೆ ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR 2026)ದೇ ಹವಾ. ಒಂದೆಡೆ ಮನೆ ಮನೆಗೆ ಬರುವ ಚುನಾವಣಾ ಆಯೋಗದ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಸರಿಪಡಿಸುತ್ತಿದ್ದರೆ ಇನ್ನೊಂದೆಡೆ ಸೈಬರ್ ವಂಚಕರು, ಸಾಮಾನ್ಯ ಜನರ ಮುಗ್ಧತೆ, ಗೊಂದಲ, ಅಜ್ಞಾನ ಮತ್ತು ಆತಂಕವನ್ನು ದುರುಪಯೋಗಪಡಿಸಿಕೊಳ್ಳಲು ಹೊಸ ಜಾಲ ಹೆಣೆದಿದ್ದಾರೆ. ನಮ್ಮ ರಾಜ್ಯದ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶದ ಸಾಮಾನ್ಯ ಜನರೇ ಇವರ ಮುಖ್ಯ ಟಾರ್ಗೆಟ್. ಇಲ್ಲಿ ಸಾಮಾನ್ಯ ಜನರಿಗೆ ತಮ್ಮ ಮತದಾನದ ಅದಿಕಾರವನ್ನು ಕಳೆದುಕ್ಕೊಳ್ಳುವ ಆತಂಕ ಒಂದು ಕಡೆ ಇದ್ದರೆ ಅದರಿಂದ ಸರಕಾರಿ ಭಾಗ್ಯಗಳು ಮತ್ತು ಇತರ ಪ್ರಯೋಜನಗಳಿಂದ ವಂಚಿತರಾಗುವ ಭಯ ಇನ್ನೊಂದು ಕಡೆಯದಾಗಿದೆ. ಹಾಗಾದರೆ ಈ ವಂಚಕರು ಯಾವೆಲ್ಲಾ ದಾರಿಗಳ ಮೂಲಕ ನಿಮ್ಮನ್ನು ತಲುಪುತ್ತಾರೆ? ನೀವೆಲ್ಲ ಹೇಗೆ ಎಚ್ಚರದಿಂದಿರಬೇಕು ಮತ್ತು ದುರದೃಷ್ಟವಶಾತ್ ವಂಚನೆಗೊಳಗಾದರೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಈ ಅಂಕಣದಲ್ಲಿ ತಿಳಿಸಿಕೊಡಲಿದ್ದೇನೆ.

ಸೈಬರ್ ವಂಚಕರು ಬಳಸುವ ಅಪಾಯಕಾರಿ ತಂತ್ರಗಳು :-

 ಇಂತಹ ವಂಚನೆಯಿಂದ ಬಚಾವಾಗಲು ನೀವು :-

ನೀವು  ಸೈಬರ್ ವಂಚನೆಗೆ ಒಳಗಾಗಿದ್ದರೆ ಏನು ಮಾಡಬಹುದು :-

ನೀವು ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನಿಮ್ಮ ಬ್ಯಾಂಕ್‌ಗೆ ತಕ್ಷಣ ಕರೆ ಮಾಡಿ, ನಡೆದ ವಿಷಯ ತಿಳಿಸಿ ಮತ್ತು ನಿಮ್ಮ ಖಾತೆ ಹಾಗೂ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ ಮತ್ತು ಪಾಸ್ವರ್ಡ್/ಪಿನ್ ಬದಲಾಯಿಸಿ. ನೀವು ಆಧಾರ್ ಕಾರ್ಡ್ ಮಾಹಿತಿ ಅಥವಾ ನಕಲು ಪ್ರತಿಯನ್ನು ಹಂಚಿಕೊಂಡಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಆಧಾರ್ ವೆಬ್ಸೈಟ್ ಅಥವಾ mAadhaar ಅಪ್ಲಿಕೇಶನ್ನಲ್ಲಿ ನಿರ್ಬಂಧಿಸಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

Exit mobile version