Site icon Welcome to CYBER MITHRA

“ಗಾಂಡೀವ”: ಭಾರತದ ಭದ್ರತಾ ವ್ಯವಸ್ಥೆಯ ಹೊಸ ಡಿಜಿಟಲ್ ಅಸ್ತ್ರ

Gandiva

ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಕೈಲಿದ್ದ ‘ಗಾಂಡೀವ’ ಧನುಸ್ಸು ಅಜೇಯವಾದುದು. ಇಂದು 21ನೇ ಶತಮಾನದ ಡಿಜಿಟಲ್ ಯುಗದಲ್ಲಿ, ಭಾರತ ಸರ್ಕಾರವು ಅದೇ ಹೆಸರಿನಲ್ಲಿ ಒಂದು ಅದ್ಭುತ ಕೃತಕ ಬುದ್ಧಿಮತ್ತೆ (AI – Artificial Intelligence) ತಂತ್ರಜ್ಞಾನವನ್ನು ರಾಷ್ಟ್ರೀಯ ಭದ್ರತಾ ವ್ಯವಸ್ಥೆಯಲ್ಲಿ ಅಳವಡಿಸಿದೆ. ಇದು ಕೇವಲ ಒಂದು ಸಾಫ್ಟ್‌ವೇರ್ ಅಲ್ಲ, ಬದಲಿಗೆ ಭಾರತದ ರಾಷ್ಟ್ರೀಯ ಗುಪ್ತಚರ ಜಾಲದ (NATGRID – National Intelligence Grid ) ಮೇಲೆ ಕಾರ್ಯನಿರ್ವಹಿಸುವ ಒಂದು ಅತ್ಯಾಧುನಿಕ ‘ಡಿಜಿಟಲ್ ಮೆದುಳು’. ಅಪರಾಧ ಮುಕ್ತ ಮತ್ತು ಭಯೋತ್ಪಾದನಾ ಮುಕ್ತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಇದು ಒಂದು ಮೈಲಿಗಲ್ಲು. ಸರಳವಾಗಿ ಹೇಳುವುದಾದರೆ ಕೇಂದ್ರ ಸರ್ಕಾರವು NATGRID  ಎಂಬ ದತ್ತಾಂಶ ಜಾಲದ ಮೇಲೆ “ಗಾಂಡೀವ” ಹೆಸರಿನ AI ತಂತ್ರಜ್ಞಾನವನ್ನು ಅಳವಡಿಸಿದೆ. ಈ ಸಾಫ್ಟ್‌ವೇರ್ ಕೋಟ್ಯಂತರ ಮಾಹಿತಿಗಳ ನಡುವೆ ಅಡಗಿರುವ ಕ್ರಿಮಿನಲ್‌ಗಳ ವಿವರಗಳನ್ನು ನಿಖರವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಭಾರತ ನಿಧಾನವಾಗಿ ವಿಶ್ವದ ದೊಡ್ಡ ಡೇಟಾ ಮತ್ತು ಗುಪ್ತಚರ ವ್ಯವಸ್ಥೆಗಳಲ್ಲಿ ಒಂದನ್ನು ನಿರ್ಮಿಸುತ್ತಿದೆ. ಈ ಲೇಖನದಲ್ಲಿ ಗಾಂಡೀವ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ, ಈಗ ಯಾವ ಹಂತದಲ್ಲಿದೆ, ಸರ್ಕಾರ ಮತ್ತು ಸಾಮಾನ್ಯ ಜನರಿಗೆ ಅದರ ಲಾಭಗಳು ಏನು, ಮತ್ತು ಖಾಸಗಿತನದ ಆತಂಕಗಳು ಏನು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ. ಭಾರತ ಸರ್ಕಾರ ಡಿಜಿಟಲ್ ಭದ್ರತೆ ಮತ್ತು ಸೈಬರ್ ಅಪರಾಧ ತಡೆಗಟ್ಟುವಿಕೆಗಾಗಿ AI ಅನ್ನು ವ್ಯಾಪಕವಾಗಿ ಬಳಸುತ್ತಿದೆ, ಭಾರತ ಸರ್ಕಾರ ಅಭಿವೃದ್ಧಿಪಡಿಸಿದ ಇತರ ಅಂತಹ ಸಾಧನಗಳ ಬಗ್ಗೆ ತಿಳಿದುಕೊಳ್ಳಲು ನನ್ನ ದ್ವಿಭಾಷಾ ಬ್ಲಾಗ್ www.cybermithra.in ಗೆ ಭೇಟಿ ನೀಡಿ.

ಏನಿದು ಗಾಂಡೀವ?

2008ರ ಮುಂಬೈ ಉಗ್ರ ದಾಳಿಯ ನಂತರ ದೊಡ್ಡ ಸಮಸ್ಯೆ ಒಂದನ್ನು ಸರ್ಕಾರ ಗಮನಿಸಿತು. ಹಲವು ಇಲಾಖೆಗಳ ಬಳಿ ಮಾಹಿತಿ ಇದ್ದರೂ, ಅವುಗಳನ್ನು ಒಟ್ಟುಗೂಡಿಸಿ ಬಳಸುವ ವ್ಯವಸ್ಥೆ ಇರಲಿಲ್ಲ. ತನಿಖಾ ಸಂಸ್ಥೆಗಳಾದ NIA, RAW ಅಥವಾ IB ನಡುವೆ ಮಾಹಿತಿ ವಿನಿಮಯವು ಹಳೆಯ ಪದ್ಧತಿಯಲ್ಲಿ ನಡೆಯುತ್ತಿತ್ತು. ಈ ಕೊರತೆಯನ್ನು ತುಂಬಲು NATGRID ಅನ್ನು ನಿರ್ಮಿಸಲಾಯಿತು. ನಮ್ಮ ದೇಶದಲ್ಲಿ ಬ್ಯಾಂಕ್ ಖಾತೆಗಳು, ಪಾಸ್‌ಪೋರ್ಟ್, ಫೋನ್ ಕರೆಗಳು ಮತ್ತು ವಾಹನ ನೋಂದಣಿಯಂತಹ ಸುಮಾರು 21 ವಿವಿಧ ಮೂಲಗಳಿಂದ ಮಾಹಿತಿಗಳನ್ನು NATGRID ಸಂಗ್ರಹಿಸುತ್ತದೆ. NATGRID ಮೊದಲಿನಿಂದಲೇ ಕೇವಲ ಡೇಟಾ ಸಂಪರ್ಕ ವ್ಯವಸ್ಥೆಯಾಗಿತ್ತು, ಇದನ್ನು ಬುದ್ಧಿವಂತ ವ್ಯವಸ್ಥೆಯಾಗಿ ಮಾಡುವುದೇ ಗಾಂಡೀವ.  ಗಾಂಡೀವ ಒಂದು “ಡಿಜಿಟಲ್ ಮೆದುಳು”, ಇದೊಂದು NATGRID ದತ್ತಾಂಶದ ಮೇಲೆ ನಿರ್ಮಿಸಲಾದ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಶ್ಲೇಷಣಾ ವ್ಯವಸ್ಥೆ. “ಗಾಂಡೀವ” ಎಂಬ ಹೆಸರು ಮಹಾಭಾರತದ ಅರ್ಜುನನ ಬಿಲ್ಲಿನಿಂದ ಬಂದಿದ್ದು, ನಿಖರತೆ ಮತ್ತು ಶಕ್ತಿಯ ಸಂಕೇತವಾಗಿದೆ. ಇದು ಕೋಟ್ಯಂತರ ಮಾಹಿತಿಯ ರಾಶಿಯನ್ನು ವಿಶ್ಲೇಷಿಸಿ, ಸಂಬಂಧವಿರುವ ದತ್ತಾಂಶಗಳ ನಡುವೆ ಕೊಂಡಿಯನ್ನು ಪತ್ತೆ ಮಾಡುತ್ತದೆ ಮತ್ತು ತನಿಖಾ ಸಂಸ್ಥೆಗಳಿಗೆ ಅಪರಾಧಗಳನ್ನು ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ನೆರವು ಮಾಡತ್ತದೆ.

ಗಾಂಡೀವ ಹೇಗೆ ಕೆಲಸ ಮಾಡುತ್ತದೆ?

ಗಾಂಡೀವ NATGRID ದತ್ತಾಂಶ ಜಾಲವನ್ನು  ಬಳಸಿ :

ಸೈಬರ್ ಕ್ರೈಂ ತಡೆಗಟ್ಟಲು ಗಾಂಡೀವ ಹೇಗೆ ಸಹಕಾರಿ?

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಮತ್ತು ಬ್ಯಾಂಕ್ ವಂಚನೆಗಳು ಹೆಚ್ಚುತ್ತಿವೆ. ಗಾಂಡೀವ ಇವುಗಳನ್ನು ತಡೆಯಲು :

ಸರ್ಕಾರ ಮತ್ತು ಜನಸಾಮಾನ್ಯರಿಗೆ ಗಾಂಡೀವ ತಂತ್ರಜ್ಞಾನದಿಂದ ಆಗುವ ಲಾಭಗಳು :-

ಗಾಂಡೀವದಿಂದ ಗೌಪ್ಯತೆ ಮತ್ತು ನಾಗರಿಕ ಹಕ್ಕುಗಳ ಆತಂಕಗಳು :-

ಗಾಂಡೀವ ಮತ್ತು NATGRID ವ್ಯವಸ್ಥೆ ವಿರುದ್ಧ ನ್ಯಾಯವಾದ ಮತ್ತು ಗಂಭೀರ ಆತಂಕಗಳು ವ್ಯಕ್ತವಾಗುತ್ತಿವೆ:

ಮುಂದಿನ ದಾರಿ – ಭದ್ರತೆ ಮತ್ತು ಸ್ವಾತಂತ್ರ್ಯ ನಡುವಿನ ಸೇತುವೆ :-

ಗಾಂಡೀವ ಸಾಧನ ಕೆಟ್ಟದ್ದಲ್ಲ, ಆದರೆ ಕಾವಲಿಲ್ಲದ ಶಕ್ತಿ ಅಪಾಯಕಾರಿ. ಈ ವ್ಯವಸ್ಥೆ ನಿಜಕ್ಕೂ ಜನರ ಒಳಿತಿಗೆ ಆಗಬೇಕಾದರೆ  :

  1. NATGRID ಮತ್ತು ಗಾಂಡೀವ ಕಾರ್ಯಾಚರಣೆಗೆ ಸ್ಪಷ್ಟ ಸಂಸದೀಯ ಕಾನೂನು ರೂಪಿಸಬೇಕು.
  2. ಸ್ವತಂತ್ರ ನ್ಯಾಯಾಂಗ ಮೇಲ್ವಿಚಾರಣಾ ಸಮಿತಿ ರಚಿಸಿ ಪ್ರತಿ ಮಾಹಿತಿ ಮನವಿ ಔಚಿತ್ಯ ಪರಿಶೀಲಿಸಬೇಕು.
  3. 2023ರ ಡಿಜಿಟಲ್ ವ್ಯಕ್ತಿಗತ ಡೇಟಾ ಸಂರಕ್ಷಣಾ ಕಾಯ್ದೆ (DPDP Act) ತ್ವರಿತವಾಗಿ ಜಾರಿಗೆ ತರಬೇಕು.
  4. AI ಅಲ್ಗಾರಿದಮ್‌ನ ತಾರತಮ್ಯ ಮತ್ತು ತಪ್ಪು ನಿರ್ಣಯಗಳ ಬಗ್ಗೆ ಮೇಲ್ಮನವಿ ವ್ಯವಸ್ಥೆ ಬೇಕು.
  5. ಸಂಸದೀಯ ಸ್ಥಾಯಿ ಸಮಿತಿ ಪ್ರತಿ ವರ್ಷ ಈ ವ್ಯವಸ್ಥೆಯ ಬಳಕೆ ಪರಿಶೀಲಿಸಬೇಕು.

ಕಡೆಯದಾಗಿ, ಗಾಂಡೀವ ಕೇವಲ ತಂತ್ರಜ್ಞಾನ ಪ್ರಶ್ನೆಯಲ್ಲ — ಇದು ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಪ್ರಶ್ನೆ. ಭಾರತ 26/11ರ ದುರಂತದಿಂದ ಪಾಠ ಕಲಿತು ಬುದ್ಧಿಮತ್ತೆ ಜಾಲ ನಿರ್ಮಿಸಿದ್ದು ಸ್ವಾಗತಾರ್ಹ. ಆದರೆ ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕ ಸ್ವಾತಂತ್ರ್ಯ — ಇವೆರಡೂ ಪರಸ್ಪರ ವಿರೋಧಿಯಲ್ಲ, ಬದಲಿಗೆ ಒಂದೇ ನಾಣ್ಯದ ಎರಡು ಮುಖಗಳು. ಅರ್ಜುನನ ಗಾಂಡೀವ ಧರ್ಮರಕ್ಷಣೆಗಾಗಿ ಬಳಕೆಯಾಗಿತ್ತು; ಇಂದಿನ ಡಿಜಿಟಲ್ ಗಾಂಡೀವವೂ ಅದೇ ಧರ್ಮದ ಮಾರ್ಗದಲ್ಲಿ ಸಾಗಬೇಕೆಂದು ನಾಗರಿಕ ಸಮಾಜ ಆಶಿಸುತ್ತಿದೆ.

Exit mobile version